
ಏಕೆ ತಲ್ಲಣಗೊಂಡು ಬಾಳುತಿರುವೆ ಮನುಜ
ಕಳವಳಗೊಂಡು ಉಸಿರಾಡುತಿರುವೆ ಇದು ಅಸಹಜ
ನಾನು ನನ್ನದು ಎಂಬ ಭವಿಷ್ಯದ ಮೇಲಿನ ತಳ್ಳಂಕ
ನನ್ನದೆಲ್ಲವನು ಕಾಪಾಡಿಕೊಳ್ಳುವ ಈ ಒಳಗಿನ ಆತಂಕ
ಎಲ್ಲರೂ ನಮ್ಮವರೇ, ನೀನು ಬೇರೆಯಲ್ಲಾ ಸಜೀವಿಗಳಿಂದ
ಎಲ್ಲದರಲ್ಲೂ ಬಾಳಿ ಬದುಕುತ್ತಿರುವುದು ಒಂದೇ ಆ ದಿವ್ಯ ಆನಂದ
ಈ ಏಕತ್ವ ಭಾವನೆ ಮೂಡಿದ ಹೃದಯದಲಿ ಪ್ರೀತಯು ಅರಳುವುದು
ನಮ್ಮೇಲಿನ ತವಕದ ಹಿಡಿತ ಸಡಿಲಗೊಂಡು ಕಳಚೀ ಕಾಣೆಯಾಗುವುದು
ನೀನು ಈ ಶರೀರಕ್ಕೆ ಸೀಮಿತವಲ್ಲದ ಅಪರಿಮಿತವಾದ ಕಾಂತಿ
ಎಲ್ಲವನೂ ಮೀರಿ ವ್ಯಾಪಿಸಿಕೊಳ್ಳುವಂತಹ ಜ್ಞಾನದ ಬೆಳಕಿನ ಜ್ಯೋತಿ

Nijavada matu Namma jeevana gondalada ayomaya jeevana. Kavite tumba chennagide
Very true and wonderfully brought out in the poem 🙏👍
ಧನ್ಯವಾದಗಳು.