
ಅತ್ಯುನ್ನತ ಸಂದೇಶ, ನಮ್ಮದಾಗಿದೆ
ಬಾಳುವ ಕಲೆಯನ್ನು, ತಿಳಿಸಲಾಗಿದೆ
ಎಲ್ಲವು, ದೈವೀ ಸೃಷ್ಟಿಯಿಂದ, ನಿರ್ಮಿತವಾಗಿದೆ
ಎಲ್ಲವು, ದೈವೀ ಶಕ್ತಿಯಿಂದ, ವ್ಯಾಪಿಸಿಕೊಂಡಿದೆ
ಸೃಷ್ಟಿಯ ನಿರ್ಮಾಣ, ನಿರ್ಮಲ ಪ್ರೀತಿಯ ಚಿತ್ರಣ
ಪಡೆದುಕೊಳ್ಳೋಣ, ಈ ಪ್ರೀತಿಯ ಅಪ್ಪಟ ಗುಣ
ವಿಶ್ವಾಸ ಉಳ್ಳವರು, ಭಕ್ತಿಭಾವದಿಂದ ಬಾಳುವರು
ಕೇವಲ ದೇಗುಲದಲ್ಲಿ ಮಾತ್ರ, ಹುಡುಕಾಡದಿಹರು
ನಮ್ಮನ್ನು ಇದು ಸೆಳೆಯುತ್ತಿದೆ, ಸತತವಾಗಿ ತನ್ನೆಡೆಗೆ
ಪ್ರಾಪ್ತಿಸಲು ಹಾತೊರೆಯೋಣ, ಬಾಗಿ ನಮ್ಮೊಳಗೆ.

ಬಹಳ ಆಳವಾದ ಚಿಂತನೆ. Thanks for sharing.
“ವಿಶ್ವಾಸ ಉಳ್ಳವರು, ಭಕ್ತಿಭಾವದಿಂದ ಬಾಳುವರು
ಕೇವಲ ದೇಗುಲದಲ್ಲಿ ಮಾತ್ರ, ಹುಡುಕಾಡದಿಹರು” — ಕವಿತೆಯ ಸಾರಾಂಶವನ್ನು ಈ ಎರಡು ಸಾಲುಗಳಲ್ಲಿ ಎಷ್ಟು ಚೆನ್ನಾಗಿ ಹೇಳಲಾಗಿದೆ!! ಧನ್ಯವಾದಗಳು. 🙏